ನಿಮಗೆ ಮೋದಿಯ ಚೊಂಬು ಬೇಕೋ ಅಥವ ಕಾಂಗ್ರೆಸ್ ನ ಅಭಿವೃದ್ದಿಯ ಗ್ಯಾರಂಟಿ ಬೇಕೋ ನೀವೇ ನಿರ್ಧಾರ ಮಾಡಿ ಎಂದು ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ಜನರು ಈಗಾಗಲೇ ತಿರ್ಮಾನಿಸಿದ್ದಾರೆ. ಕಾಂಗ್ರೆಸ್ ಬೇಕು ಎಂದು. ವಿಧಾನ ಸಭಾ ಚುನಾವಣೆಗೆ ಮುನ್ನ ನೀಡಿದ್ದ ಗ್ಯಾರಂಟಿಗಳ ಭರವಸೆಯನ್ನು ರಾಜ್ಯದಲ್ಲಿ ಜಾರಿ ಮಾಡಲಾಗಿದೆ. ಇದರಿಂದ ಐದು ಭಾಗ್ಯಗಳ ಪ್ರಯೋಜನವನ್ನು ಸುಮಾರು 4 ಕೋಟಿ ಜನರು ಪಡೆಯುತ್ತಿದ್ದಾರೆ. ಮಹಿಳೆಯರು 2 ಸಾವಿರ ಪಡೆಯುತ್ತಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೈದು ಗ್ಯಾರಂಟಿಗಳನ್ನು ನೀಡುವ ಭರವಸೆ ನೀಡುತ್ತಿದೆ. ಇದರಲ್ಲಿ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ಕೊಡಲಾಗುತ್ತದೆ. ರಾಜ್ಯ ಸರ್ಕಾರ ನೀಡುವ 2 ಸಾವಿರದ ಜೊತೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಮಹಾಲಕ್ಷ್ಮಿ ಯೋಜನೆಯಡಿ ನೀಡುವ 8 ಸಾವಿರ ಸೇರಿ ತಿಂಗಳಿಗೆ 10 ಸಾವಿರವಾಗುತ್ತದೆ ಎಂದರು. ಇನ್ನು ಮೋದೊಯವರಿಂದ ಉಂಟಾಗಿರುವ. ನಿರುದ್ಯೋಗದ ಬಗ್ಗೆಯೂ ಕಾಂಗ್ರೆಸ್ ಹೇಳಿದ್ದು, ನಿರುದ್ಯೋಗಿ ಯುವಕರಿಗೆ ಅಪ್ರೆಂಟಿಶಿಪ್ ಯೋಜನೆಯಡಿ, ತರಬೇತಿ ನೀಡುವ ಸಮಯದಲ್ಲಿ ಅವರಿಗೆ ತಿಂಗಳಿಗೆ 8300 ರು ನೀಡಲಾಗುತ್ತದೆ. ಇದು ದೇಶದ ಪ್ರತಿಯೊಬ್ಬ ನಿರುದ್ಯೋಗಿ ಯುವಕನಿಗೆ ನೀಡಲಾಗುತ್ತಿದ್ದು, ಇದು ಕಾಂಗ್ರೆಸ್ ಗ್ಯಾರಂಟಿ. ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡು ಜನರಿಗೆ ಸೌಲಭ್ಯಗಳನ್ನು ನೀಡಿದೆ. ಆದರೆ ಬಿಜೆಪಿ 10 ವರ್ಷಗಳಿಂದ ಜನರ ಕೈಗೆ ಚೊಂಬನ್ನು ನೀಡಿದೆ. ರಾಜ್ಯಕ್ಕೆ ಬರ ಪರಿಹಾರ, 15 ಕೋಟಿ ಜಿಎಸ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ನೀಡುವಲ್ಲಿ ಚೊಂಬು ನೀಡಿದೆ. 2 ಕೋಟಿ ಉದ್ಯೋಗ ನೀಡುವಲ್ಲಿಯೂ ಚೊಂಬು ನೀಡಿದ್ದಾರೆ. ರಾಜ್ಯದ 27 ಎಂಪಿಗಳು ಕೂಡ ಚೊಂಬು ನೀಡಿದ್ದಾರೆ.ಇದೀಗ ನಿಮ್ಮೆದುರಲ್ಲಿ ಒಂದು ಗ್ಯಾರಂಟಿ ಮಾಡೆಲ್ ಹಾಗು ಚೊಂಬು ಮಾಡೆಲ್ ಇದೆ. ಈಗ ಜನ ಚೊಂಬು ಮಾಡೆಲ್ ಬೇಕೋ ಅಥವ ಅಭಿವೃದ್ದಿ ಮಾಡೆಲ್ ಬೇಕೋ ಎಂದು ತೀರ್ಮಾನಿಸಬೇಕಿದೆ. ರಾಜ್ಯದ ಜನತೆ ಅಭಿವೃದ್ದಿಯ ಮಾಡೆಲ್ ನ್ನು ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಉಳಿದ ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದರು. ಈ ಸಮಯದಲ್ಲಿ ಅಭ್ಯರ್ಥಿ ಚಂದ್ರಪ್ಪ, ಸಚಿವ ಸುಧಾಕರ್, ಶಾಸಕರಾದ ರಘುಮೂರ್ತಿ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಕೆಪಿಸಿಸಿ ಮಾಧ್ಯಮ ವಕ್ತಾರ ಬಾಲಕೃಷ್ಣ ಯಾದವ್ ಇದ್ದರು.