ನಗರಸಭೆ ಕೊಠಡಿಯಲ್ಲಿ ಮೂರು ವರ್ಷಗಳಿಂದ ತುಕ್ಕು ಹಿಡಿಯುತ್ತಿರುವ ಲಾಪ್ ಟಾಪ್

ಜಿಲ್ಲಾ ಸುದ್ದಿ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆಂದು 2021-22 ನೇ ಸಾಲಿಗೆ ಖರೀದಿಸಿದ್ದ ಲಾಪ್ ಟಾಪ್ ಗಳನ್ನು ಇದುವರೆಗೂ ಯಾಕೆ ವಿತರಿಸಿಲ್ಲ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ನಗರಸಭೆ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು. ಆವರು ಚಿತ್ರದುರ್ಗ ನಗರಸಭೆ ಕೌನ್ಸಿಲಿಂಗ್ ಸಭಾಂಗಣದಲ್ಲಿ‌ ನಡೆದ. ಬಜೆಟ್ ಹಾಗೂ ಅಭಿವೃದ್ದಿ ಸಭೆ ಅಧ್ಯಕ್ಷತೆ ವಹಿಸಿ ಮಾತಾಡಿದರು. 2021- 22 ನೇ ಸಾಲಿನಲ್ಲಿ ಖರೀದಿಸಿದ್ದೀರಾ, ಅಂದೆ 18  ವಿದ್ಯಾರ್ಥಿಗಳ ಆಯ್ಕೆಯನ್ನು ಮಾಡಿದ್ದೀರಾ ಮತ್ಯಾಕೆ ವಿತರಿಸಿದೆ ಬಾಕಿ‌ ಇಟ್ಟುಕೊಂಡಿದ್ದಿರಾ, ಅದನ್ನು ಈಗ ವಿತರಿಸಲು ಹೋದರೆ ತಪ್ಪಾಗುತ್ತದೆ. ಯಾವ ಆಧಾರದ ಮೇಲೆ ಈಗ ವಿತರಿಸಲು ಅನುಮತಿ ಕೇಳುತ್ತಿದ್ದಾರ? ಅವುಗಳು ಮೂರು ವರ್ಷಗಳು ಹಳೆಯದಾಗಿವೆ. ವಿತರಿಸಲು ಯೋಗ್ಯವಾಗಿವೆಯೇ? ಮೊದಲು ಎನ್ ಐ ಸಿ ಯಿಂದ ಪರೀಕ್ಷಿಸಿಕೊಳ್ಳಿ, ಬಳಸಲು ಯೋಗ್ಯವಾಗಿಯೇ ಎಂದು ಪ್ರಮಾಣ ಪತ್ರ ಪಡೆಯಿರಿ, ಆಮೇಲೆ ನೋಡೋಣ, ಅಲ್ಲಿಯವರೆಗೂ ಇದನ್ನು ಪೆಂಡಿಂಗ್ ಇಡಬೇಕು ಎಂದು ಸೂಚಿಸಿದರು.

 

 

 

 

Leave a Reply

Your email address will not be published. Required fields are marked *