ಕುಶಾಲನಗರ ಕಾಂಗ್ರೆಸ್ ನಲ್ಲಿ ಬಿನ್ನಮತ ಸ್ಪೋಟ:ವರಿಷ್ಠರನ್ನು ಭೇಟಿ ಮಾಡಿದ ಅನಂತ್ ಕುಮಾರ್
ಕುಶಾಲನಗರ ಬ್ಲಾಕ್ ಮಟ್ಟದ ನೂತನ ಅಧ್ಯಕ್ಷರನ್ನಾಗಿ ವಿ.ಪಿ ಶಶಿಧರ್ ರನ್ನು ನೇಮಕ ಮಾಡಿದ ಬಳಿಕ ಸ್ಥಳೀಯ ಕಾಂಗ್ರೆಸ್ ನಲ್ಲಿ ದಿನದಿಂದ ದಿನಕ್ಕೆ ಕುತೂಹಲಕಾರಿ ಬೆಳವಣಿಗೆಗಳು ಕಂಡು ಬರುತ್ತಿದ್ದು, ಇಂದು ಅಸಮಾಧಾನ ಗೊಂಡ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತ್ ಕುಮಾರ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿದರು.
ಸುಮಾರು 200 ಕಾರ್ಯಕರ್ತರು ಕಳೆದ ಎರಡು ವರ್ಷ,ಒಂಬತ್ತು ತಿಂಗಳಿಂದ ವರದಿಯನ್ನು ಸಲ್ಲಿಸಿ,ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಕೆಲಸವನ್ನು ವರಿಷ್ಠರಿಗೆ ವಿವರಿಸಿದರು.