ರಾಜ್ಯದ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು.
ಸಭೆಯಲ್ಲಿ ರಾಜ್ಯದ ಶಾಲಾ ಮಕ್ಕಳಿಗೆ ಒಂದು ಜೊತೆ ಶೂ ಎರಡು ಜೊತೆ ಸಾಕ್ಸ್ ನೀಡಲು ಸಂಪುಟ ಸಭೆ ಅನುಮೋದಿಸಿತು.ಇದಕ್ಕಾಗಿ 123 ಕೋಟಿ ರೂಪಾಯಿಗೆ ಒಪ್ಪಿಗೆಯನ್ನು ಸೂಚಿಸಿತು.
ಇದರ ಜೊತೆಗೆ ಇನ್ನಷ್ಟು ಪ್ರಗತಿ ಪರ ಯೋಜನೆಗಳಿಗೆ ಅನುಮೋದನೆಯನ್ನು ನೀಡಿತು, ಸಚಿವ ಸಂಪುಟ ಸಭೆಯ ನಂತರ ಜೆಸಿಮಾಧುಸ್ವಾಮಿ ಮಾತನಾಡಿ, ರಸಗೊಬ್ಬರ ದಾಸ್ತಾನಿ ಬ್ಯಾಂಕ್ ಗ್ಯಾರಂಟಿ, ಕೃಷಿಇಲಾಖೆಗೆ ಶೂರಿಟಿ ಕೊಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು