ಬೋನಿಗೆ ಸೆರೆ ಸಿಕ್ಕ ಚಿರತೆ ಮರಿ

ಜಿಲ್ಲಾ ಸುದ್ದಿ

ಚಿತ್ರದುರ್ಗದ ತಮಟುಕಲ್ಲು ಗ್ರಾಮದ ಜಮೀನಿನಲ್ಲಿ ಚಿರತೆ ಮರಿಯೊಂದು ಅರಣ್ಯ ಇಲಾಖೆಯ ಕಾರ್ಯಾಚರಣೆ ನಡೆಸಿದ್ದು, ಅವರಿಟ್ಟಿದ್ದ ಬೋನಿಗೆ ಸೆರೆ ಸಿಕ್ಕಿದೆ.
ಗ್ರಾಮದಲ್ಲಿ‌ ಮೂರು ಚಿರತೆಗಳು ಬಹಳ‌ ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು, ಜಮೀನುಗಳಿಗೆ ಬರುತ್ತಿದ್ದವು. ಇದರಿಂದ ಭಯ ಭೀತರಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.‌ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಬೋನನ್ನು ಇರಿಸಿದ್ದು, ತಡ ರಾತ್ರಿ ಬಂದ ಚಿರತೆ ಮರಿ ಸೆರೆ ಸಿಕ್ಕಿದೆ. ಸೆರೆ ಸಿಕ್ಕ ಚಿರತೆಯನ್ನು ಬೋನಿನ ಸಮೇತ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರೂ ಇನ್ನೆರಡು ಚಿರತೆಗಳನ್ನು ಹಿಡಿಯುವಂತೆ ಮನವಿಯನ್ನು ಮಾಡಿದ್ದಾರೆ

 

 

 

Leave a Reply

Your email address will not be published. Required fields are marked *