BREAKING NEWS
ಮುರುಘಾ ಮಠದ ನೂತನ ಪೀಠಾಧಿಪತಿ ಸ್ಥಾನಕ್ಕೆ ದಾವಣಗೆರೆ ವಿರಕ್ತ ಮಠದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿಯವರು ನೇಮಕಾವಾಗುವ ಸಾಧ್ಯತೆ ಇದ್ದು ಮುರಘಾ ಮಠದಲ್ಲಿ ದೀಕ್ಷೆ ಪಡೆದಿರುವ ಇತರೆ ಸ್ವಾಮೀಜಿಗಳಿಂದ ಅಪಸ್ವರ ಕೇಳಿಬಂದಿದೆ.
ಬಸವಪ್ರಭು ಸ್ವಾಮೀಜಿಗಳನ್ನು ಜೈಲಿನಲ್ಲಿರುವ ಶಿವಮೂರ್ತಿ ಶರಣರೇ ಆಯ್ಕೆ ಮಾಡಿದ್ದಾರೆ. ಜೈಲಿನಿಂದ ಬಿಡುಗಡೆ ಯಾಗಿ ಬಂದರೆ ಪುನಃ ಶರಣರಿಗೆ ಸ್ಥಾನ ಬಿಟ್ಟುಕೊಡಬೇಕು ಹಾಗೂ ಶರಣರ ಕೋರ್ಟ್ ಖರ್ಚು ಸೇರಿದಂತೆ ಎಲ್ಲಾ ಆಗು ಹೋಗುಗಳನ್ನು ನೋಡಿಕೊಳ್ಳಬೇಕು ಎಂಬ ಸೂಚನೆಯ ಮೇರೆಗೆ ಬಸವಪ್ರಭು ಸ್ವಾಮೀಜಿಯವರನ್ನು ಶರಣರು ಆಯ್ಕೆ ಮಾಡಿದ್ದಾರೆಂದು ಹೇಳಲಾಗುತ್ತಿದೆ ಈ ಹಿನ್ನೆಲೆಯಲ್ಲಿ ಬಸವಪ್ರಭು ಸ್ವಾಮೀಜಿ ಆಯ್ಕೆ ಸಮ್ಮತವಲ್ಲ ಹಾಗೂ ಅವರಿಗೆ ಮಠವನ್ನು ಮುನ್ನಡೆಸುವ ಸಾಮರ್ಥ್ಯವೂ ಇಲ್ಲ ಎಂದು ಕೆಲವು ಸ್ವಾಮೀಜಿಗಳು ಹಾಗೂ ವೀರಶೈವ ಮುಖಂಡರು ಅಪಸ್ವರ ತೆಗೆದಿದ್ದು ಬಸವಪ್ರಭು ಸ್ವಾಮೀಜಿ ಆಯ್ಕೆ ನ್ಯಾಯ ಸಮ್ಮತವಲ್ಲ ಎಂಬ ಮಾತುಗಳು ಕೇಳಿಬಂದಿವೆ.