ಅಮಾನತ್ತು ವಾಪಾಸ್ಸು ಪಡೆಯಿರಿ ಇಲ್ಲವೇ ಸಾಮೂಹಿಕ‌ ರಜೆ ಮೇಲೆ ಕಳುಹಿಸಿ

ಜಿಲ್ಲಾ ಸುದ್ದಿ

ಅಮಾನತ್ತು ಮಾಡಿರುವ ನಾಲ್ಕು ಜನ ಪಿಡಿಒ ಗಳ ಅಮಾನತ್ತು ಆದೇಶ  ವಾಪಾಸ್ಸು ಪಡೆಯಿರಿ ಇಲ್ಲವೇ ಜಿಲ್ಲೆಯ ಎಲ್ಲಾ ಪಿಡಿಒಗಳನ್ನು ಸಾಮೂಹಿಕ ರಜೆ ಮೇಲೆ ಕಳುಹಿಸಿ ಎಂದು ಪಿಡಿಒಗಳು ಸಿಇಒಗೆ  ಮನವಿ ಸಲ್ಲಿಸಿದರು. ಚಿತ್ರದುರ್ಗ  ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಸಿಇಒ ಸೋಮಶೇಖರ್ ಅವರನ್ನು ಭೇಟಿ‌ ಮಾತಾಡಿದರು.  ತಾವು ಸಾಮೂಹಿಕ  ರಜೆ ಮೇಲೆ ಕಳುಹಿಸಿ ಜೊತೆಗೆ ನಾವು ನಿಮ್ಮ ಆದೇಶವನ್ನು ಪಾಲಿಸಲು ಸಿದ್ಧರಿದ್ದೇವೆ. ಈಗಾಗಲೇ 4 ಜನರನ್ನು ಅಮಾನತ್ತುಗೊಳಿಸಿದ್ದೀರಾ, ಇನ್ನು ಇಬ್ಬರನ್ನು ಅಮಾನತ್ತು ಮಾಡಲು ಆಯುಕ್ತಾಲಯಕ್ಕೆ ಬರೆದಿದ್ದೀರಾ ನಮ್ಮ ತಪ್ಪಿಲ್ಲದೆ ಇದ್ದರೂ ನಮ್ಮನ್ನು ಅಮಾನತ್ತುಗೊಳಿಸಲಾಗುತ್ತಿದೆ. ಆದ್ದರಿಂದ ಹಿಂದೆ ಅಮಾನತ್ತು ಮಾಡಿದ ನಾಲ್ಕು ಜನರ ಅಮಾನತ್ತು ಆದೇಶ ಹಿಂದಕ್ಕೆ ಪಡೆಯಬೇಕು. ಇಲ್ಲದೇ ಹೋದರೆ ನಮ್ಮ ಸಾಮೂಹಿಕ ರಜೆ ಮೇಲೆ ಕಳುಹಿಸಿ ಎಂದು ಒತ್ತಾಯಿಸಿದರು.  ಜೊತೆಗೆ ತಮ್ಮ ಕೆಲ ಬೇಡಿಕೆಗಳನ್ನು  ಮುಂದಿಟ್ಟಿದ್ದು,  ಆ ಬೇಡಿಕೆಗಳು‌ ಹಾಗೂ ಸಮಸ್ಯೆಗಳನ್ನು  ಹಂತ ಹಂತವಾಗಿ   ಬಗೆಹರಿಸಲಾಗುವುದು ಎಂದರು.‌ ಕೆಲವುಗಳನ್ನು ಮಾತಾಡಿ ಬಗೆಹರಿಸುವಂತೆ ಉಪ‌ ಕಾರ್ಯದರ್ಶಿ ಕೆ. ತಿಮ್ಮಪ್ಪ ಅವರಿಗೆ    ಸಿಇಓ ಸೋಮಶೇಖರ್ ಸೂಚಿಸಿ ಮನವಿಯನ್ನು ಸ್ವೀಕರಿಸಿದರು.

 

 

 

Leave a Reply

Your email address will not be published. Required fields are marked *