ದಾವಣಗೆರೆ: ಆಟೋ ನಿಲ್ಲಿಸುವ ವಿಚಾರಕ್ಕೆ ಇಬ್ಬರಿಗೆ ಚೂರಿ ಇದಿರುವ ಘಟನೆ ಬೇತೂರು ರಸ್ತೆಯಲ್ಲಿ ನಡೆದಿದೆ.
ದಾವಣೆಗೆರೆ ಬೇತೂರು ರಸ್ತೆಯಲ್ಲಿ ಮೈಲಾರಿ, ಸ್ನೇಹಿತರು ಹಾಗೂ ಇರಿತಕ್ಕೋಳಗಾದ ಇಬ್ಬರ ನಡುವೆ ಗಲಾಟೆ ನಡದಿದೆ. ಮಾತಿಗೆ ಮಾತು ಬೆಳೆದು ಮೈಲಾರಿ, ಮಂಜು, ಸತೀಶ್ ಮತ್ತು ಪವನ್ ಹಾಗೂ ಇನ್ನಿತರೇ 15 ಜನರು ಸೇರಿ,ಸೈಯದ್ (26), ತಾಹೀರ್ (25) ಎನ್ನುವವರಿಗೆ ಚಾಕು ಇರಿದು ಹಲ್ಲೆ ಮಾಡಿದ್ದಾರೆ. ಚಾಕು ಇರಿತಕ್ಕೆ ಒಳಗಾದವರು ಬಾಪೂಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಜಾದ್ ನಗರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ