ಎಂ.ಬಿ ಪಾಟೀಲ್ ಸಿಎಂ ಗೆ ಬರೆದ ಪತ್ರದಲ್ಲಿ ಏನಿದೆ?

ರಾಜಕೀಯ

ವಿಜಯಪುರ: ಲಿಂಗಾಯಿತ ಅಭಿವೃದ್ದಿ ನಿಗಮ ಸ್ಥಾಪನೆ ಮಾಡುವುದರ   ಜೊತೆಗೆ ಲಿಂಗಾಯಿತರಿಗೆ 16 ರಿಂದ 18 ರಷ್ಟು  ಮೀಸಲಾತಿಯನ್ನು ನೀಡಬೇಕು‌ ಎಂದು  ಮಾಜಿ ಸಚಿವ ಹಾಗೂ ಲಿಂಗಾಯಿತ  ಸ್ವತಂತ್ರ ಧರ್ಮ ಹೋರಾಟಗಾರ ಎಂಬಿ. ಪಾಟೀಲ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.

Chitradurga mb patil wrote letter to cm

 

 

 

ನೆರೆಯ ಮಹಾರಾಷ್ಟ್ರದ ಮಾದರಿಯಲ್ಲಿ ನೀಡಿರುವಂತೆ ಕರ್ನಾಟಕದಲ್ಲೂ ಕೂಡ ಲಿಂಗಾಯಿತರಿಗೆ  ಶೆ. 16 ರಿಂದ 18 ರಷ್ಟು  ಮೀಸಲಾತಿ ನೀಡಬೇಕು. ಈ ಸಮೂದಾಯಕ್ಕೆ ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ಸೌಲಭ್ಯಗಳಲ್ಲಿ‌ ಮೀಸಲಾತಿ ಕಲ್ಪಿಸಬೇಕು. ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಲಿಂಗಾಯಿತ ಜನ ಸಂಖ್ಯೆ ಇದೆ. ಇಷ್ಟು ದೊಡ್ಡ ಜನ ಸಂಖ್ಯೆಗೆ ಸದ್ಯ ಸಿಗುತ್ತಿರುವ ಮೀಸಲಾತಿಯಿಂದ ಯಾವುದೇ ಪ್ರಯೋಜನಗಳಾಗುತ್ತಿಲ್ಲ. ಶಿಕ್ಷಣ, ಉದ್ಯೋಗ, ಸ್ಕಾಲರ್ಶಿಪ್ ಸೇರಿದಂತೆ ಇತರೇ ಎಲ್ಲಾ ಸೌಲಭ್ಯಗಳಲ್ಲಿ ಲಿಂಗಾಯಿತರಿಗೆ  ನ್ಯಾಯ ದೊರಕಿಸಿಕೊಡಬೇಕು. ಲಿಂಗಾಯಿತರಿಗೆ ಅಭಿವೃಧ್ಧಿ‌ನಿಗಮ ಸ್ಥಾಪಿಸಿ ರೂ. 100 , 200 ಕೋಟಿ ಅನುದಾನ  ಒದಗಿಸಿದರೆ ಪ್ರಯೋಜನವಾಗುವುದಿಲ್ಲ. ಅಭಿವೃದ್ಧಿ ನಿಗಮ ಸ್ಥಾಪನೆ ಎಂಬುದು ಕೇವಲ ಕಣ್ಣೋರೆಸುವ ತಂತ್ರವಾಗಿದೆ. ಲಿಂಗಾಯಿತರು ಅರ್ಥಿಕ, ಸಾಮಾಜಿಕ ಪ್ರಗತಿ ಸಾಧಿಸಬೇಕಾದರೆ ರಾಜ್ಯ ಸರ್ಕಾರ 16 ರಿಂದ 18 ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಸಿಎಂಗೆ ಪತ್ರದಲ್ಲಿ ಬರೆದಿದ್ದಾರೆ.

ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *