ಕೊಲೆ ಮಾಡಿ‌ ಶವವನ್ನು ಮಣ್ಣಲ್ಲಿ ಹೂತಿದ್ದ ಆರೋಪಿ ಬಂಧನ

ಕ್ರೈಂ

ಕೊಟ್ಟ ಸಾಲದ ಹಣವನ್ನು ವಾಪಾಸ್ಸು ಕೊಡಲಿಲ್ಲವೆಂದು ಹೊಡೆದು ಸಾಯಿಸಿ ಮಣ್ಣಲ್ಲಿ ಹೂತು ಹಾಕಿದ್ದ ಆರೋಪಿಯನ್ನು ಬಂಧಿಸುವುದರೊಂದಿಗೆ ತುರುವನೂರು ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಚಿತ್ರದುರ್ಗ ತಾಲೂಕಿನ ತುರುವನೂರಿನ ಸಿದ್ದವ್ವನದುರ್ಗದ ಬಸವರಾಜಪ್ಪ ಚಂದ್ರಣ್ಣ ನ ಬಳಿ ಒಂದು ಲಕ್ಷ ಸಾಲ ಪಡೆದಿದ್ದ, ಸಾಲದ ಹಣವನ್ನು ಕೊಟ್ಟಿರಲಿಲ್ಲ.ಇದರಿಂದ ಚಂದ್ರಣ್ಣ ಬಸವರಾಜಪ್ಪನನ್ನು ಹೊಡೆದು ಸಾಯಿಸಿ ಸಿದ್ದವ್ವನದುರ್ಗ ಜಮೀನಿನಲ್ಲಿ ಹೂತು ಹಾಕಿದ್ದ, ಆದರೆ ಅವರ ಕುಟುಂಬದವರು ಬಸವರಾಜಪ್ಪ ನಾಪತ್ತೆಯಾಗಿದ್ದಾರೆ ಹುಡುಕಿಕೊಡುವಂತರ ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ನಡುವೆ ಸಿದ್ದವ್ವನದುರ್ಗ ಜಮೀನಿನಲ್ಲಿ ನಾಯಿಯೊಂದು ತಲೆ ಬುರುಡೆಯನ್ನು ಎಳೆದು ತಂದಿತ್ತು. ಇದನ್ನು ಅಲ್ಲಿನ ದನಗಾಯಿಗಳು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದು, ಗ್ರಾಮಸ್ಥರು ಹಾಗೂ ಕುಟುಂಬದವರು ಪೊಲೀಸರೊಂದಿಗೆ ಬಂದು ನೋಡಿ ಬಸವರಾಜಪ್ಪನ ದೇಹವೆಂದು ಗುರುತು ಹಿಡಿದಿದ್ದರು. ನಂತರ ಪೊಲೀಸರು ಪ್ರಕರಣದ ಜಾಡು ಹಿಡಿದು ಹೊರಟಿದ್ದು,ಇಂದು ಸಿಪಿಐ ಲತಾ ನೇತೃತ್ವದಲ್ಲಿ ಆರೋಪಿ ಚಂದ್ರಣ್ಣ ನನ್ನು ಬಂಧಿಸಿದ್ದಾರೆ.

 

 

 

Leave a Reply

Your email address will not be published. Required fields are marked *