ಕೇಂದ್ರ ಸರ್ಕಾರ ಜನರ ಆರೋಗ್ಯಕ್ಕೆ ಅನುದಾನ ಹೆಚ್ಚಿಸಬೇಕು

ಜಿಲ್ಲಾ ಸುದ್ದಿ

 

 

 

 

ಕೇಂದ್ರ ಸರ್ಕಾರ ಜನರ ಆರೋಗ್ಯಕ್ಕೆ ಅನುದಾನ ಹೆಚ್ಚಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಪಿ.ಟಿ.ವಿಜಯಕುಮಾರ್ ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘದ ಹೊಳಲ್ಕೆರೆ ಶಾಖೆಯನ್ನು ಐ.ಎಂ.ಎ ರಾಜ್ಯಾಧ್ಯಕ್ಷ ಡಾ.ಎಸ್.ಶ್ರೀನಿವಾಸ್ ಉದ್ಘಾಟಿಸಿದರು.
ಡಾ. ಪಿ.ಟಿ.ವಿಜಯಕುಮಾರ್ ಮಾತನಾಡಿ, ಜನರ ಆರೋಗ್ಯಕ್ಕಾಗಿ ಬೇರೆ ಬೇರೆ ದೇಶಗಳಲ್ಲಿ ಸರ್ಕಾರಗಳು 5 ರಿಂದ 7 ರ ತನಕ ಜಿ.ಡಿ.ಪಿ ಯಲ್ಲಿ ಅನುದಾನವನ್ನು ಒದಗಿಸುತ್ತಾರೆ. ಆದರೆ, ಕೇಂದ್ರ ಸರ್ಕಾರ 2.5 ಆಯ-ವ್ಯಯದಲ್ಲಿ ಇಡುವ ಅನುದಾನ ಜನರ ಆರೋಗ್ಯ ಮತ್ತು ಮೂಲಭೂತ ಸೌಕರ್ಯಕ್ಕೆ ಸಾಕಾಗುವುದಿಲ್ಲ, ಆರೋಗ್ಯ ಮತ್ತು ಶಿಕ್ಷಣವನ್ನು ಎಲ್ಲರಿಗೂ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕನಿಷ್ಠ 5ರಷ್ಟು ಅನುದಾನವನ್ನು ಹೆಚ್ಚಿಸಬೇಕು ಎಂದರು.
ಆಯುರ್ವೇದ, ಯುನಾನಿ, ಹೋಮಿಯೋಪತಿ ಮತ್ತು ಸಿದ್ದ ವೈದ್ಯಕೀಯ ಪದ್ಧತಿಗಳಲ್ಲಿ 06 ತಿಂಗಳ ವೃತ್ತಿ ತರಬೇತಿ ನೀಡುವುದು ಸರಿಯಲ್ಲ. ಆರು ತಿಂಗಳಲ್ಲಿ ಮನುಷ್ಯನ ತುರ್ತು ಚಿಕಿತ್ಸೆ ಸೇರಿದಂತೆ ಯಾವುದೇ ಖಾಯಿಲೆಯ ಬಗ್ಗೆ ಅಧ್ಯಯನ ಮಾಡಲು ಸಾಧ್ಯವಿರುವುದಿಲ್ಲ. ಹಾಗಾಗಿ ಆರು ತಿಂಗಳ ತರಬೇತಿ ಪಡೆದು ಚಿಕಿತ್ಸೆ ನೀಡಿ, ಮನುಷ್ಯರ ಪ್ರಾಣದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ, ಹಾಗಾಗಿ ಅವರಿಗೆ ತುರ್ತು ಚಿಕಿತ್ಸೆಗಳ ಬಗ್ಗೆ ಯಾವುದೇ ಅರಿವು ಇಲ್ಲದೇ ಇರುವ ಕಾರಣ ಈ ಪದ್ಧತಿಯನ್ನ ಜಾರಿಗೆ ತರಬಾರದು ಎಂದರು.
ಡಾ. ಎಂ.ವಿ.ರಶ್ಮಿ ಮೊಟ್ಟ ಮೊದಲ ಬಾರಿಗೆ ವೈಜ್ಞಾನಿಕ ಅಧಿವೇಶನವನ್ನ ಏರ್ಪಡಿಸಿ ನಡೆಸಿದರು. ವಾಸವಿ ಲ್ಯಾಬೋರೋಟರಿಯ ನಿರ್ದೇಶಕರಾದ ಹೆಚ್.ವಿ.ವಾಣಿ ಮತ್ತು ಡಾ. ಸಿ.ನಾರಾಯಣಮೂರ್ತಿಯವರ ಪ್ರಾಯೋಜಕತ್ವದಡಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಐ.ಎಂ.ಎ ರಾಜ್ಯಾಧ್ಯಕ್ಷ ಡಾ. ಎಸ್.ಶ್ರೀನಿವಾಸ್ ಚಿತ್ರದುರ್ಗ ಐ.ಎಂ.ಎ ಕಾರ್ಯದರ್ಶಿ ಡಾ. ಕೆ.ಎಂ.ಬಸವರಾಜ್ ಚರ್ಮರೋಗ ತಜ್ಞ ಡಾ. ನಾಗಾರಾಜ್‌ನಾಯ್ಕ, ಹೊಳಲ್ಕೆರೆ ಐ.ಎಂ.ಎ ಶಾಖೆಯ ಅಧ್ಯಕ್ಷ ಡಾ. ಹೆಚ್.ಎಸ್.ಶಿವಣ್ಣ, ಕಾರ್ಯದರ್ಶಿ ಡಾ. ಸಿ.ಹೆಚ್.ಮಂಜುನಾಥ, ಖಜಾಂಚಿ ಡಾ. ವಿನಯ್, ಸಿ.ಸಜ್ಜನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *