ಕಾರವಾರ: ಯುನಿವರ್ಸಲ್ ಸೊಂಪೊ ಜನರಲ್ ಇನ್ಶ್ಶೂರೆನ್ಸ್ ಕಂಪನಿ ಇಬ್ಬರು ರೈತರಿಗೆ ಒಟ್ಟು 2.02 ಲಕ್ಷ ರೂ. ಬೆಳೆ ವಿಮೆಯನ್ನು ಬಡ್ಡಿಯೊಂದಿಗೆ ಪಾವತಿಸಬೇಕು ಹಾಗೂ ಅವರಿಗೆ 20 ಸಾವಿರ ರೂ. ಪರಿಹಾರ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ನ್ಯಾಯಮಂಡಳಿ ಆದೇಶ ನೀಡಿದೆ.
ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಗ್ರಾಹಕರ ನ್ಯಾಯಮಂಡಳಿ ಬೆಳೆ ವಿಮೆ ನೀಡದ ಕಂಪನಿ ವಿರುದ್ಧ ಮಹತ್ವದ ತೀರ್ಪು ಪ್ರಕಟಿಸಿದ್ದು, ಕಂತು ತುಂಬಿಯೂ ಬೆಳೆ ವಿಮೆ ಪರಿಹಾರ ದೊರಕದ ಸಾವಿರಾರು ರೈತರಿಗೆ ಇದೊಂದು ಆಶಾಕಿರಣವಾಗಿದೆ.