ಚಿತ್ರದುರ್ಗ: ಅಕ್ರಮವಾಗಿ ಸಾಗಿಸುತ್ತಿದ್ದ ಐದು ಲಕ್ಷ ಮೌಲ್ಯದ ಅನ್ಯ ಭಾಗ್ಯ ಅಕ್ಕಿ ಯನ್ನು ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಪೋಲಿಸರು ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗದ ಸೀಬಾರದ ಬಳಿ ದಾವಣಗೆರೆಯ ಅಪ್ಸಾನ ಟ್ರಾನ್ಸ್ ಪೋರ್ಟ್ ನ ರವಿಕುಮಾರ್ ಕೆ ಎ -17-3036 ನಂಬರಿನ ಲಾರಿಯಲ್ಲಿ ಐದು ಲಕ್ಷ. ಮೌಲ್ಯದ 180 ಕ್ವಿಂಟಾಲ್ ನ 360 ಚೀಲಗಳನ್ನು ತುಂಬಿಸಿ ತುಮಕೂರಿನ ಅರ್ಮಾನ್ ಎಂಟರ್ ಪ್ರೈಸಸ್ ಗೆ ಕಳುಹಿಸಿದ್ದು. ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಖಚಿತ ಮಾಹಿತಿಯೂ ಗ್ರಾಮಾಂತರ ಪೋಲಿಸರಿಗೆ ಸಿಕ್ಕಿದ್ದು, ದಾಳಿಯನ್ನು ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ನಡೆಸಿದ್ದಾರೆ.
ಅಕ್ಕಿ, ಲಾರಿಯನ್ನು ವಶಪಡಿಸಿಕೊಂಡು ಚಾಲಕ ಸುರೇಶ್ ನನ್ನು ಬಂಧಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಜರಣ ದಾಖಲಿಸಿಕೊಂಡು ಲಾರಿ ಚಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ