ಟಿವಿ ರಿಮೋಟ್ ಗಾಗಿ ಸಹೋದರರ ನಡುವೆ ಜಗಳ ತಂದೆಯಿಂದ ಮಗನ ಕೊಲೆ

ಕ್ರೈಂ

ಟಿವಿ ರಿಮೋಟ್ ವಿಚಾರಕ್ಕೆ ಮಕ್ಕಳ ನಡುವೆ ಜಗಳವಾಗಿದ್ದು, ಮಕ್ಕಳ ಜಗಳದಿಂದ ರೊಚ್ಚಿಗೆದ್ದ ತಂದೆಯೇ ಮಗನನ್ನು ಕೊಂದ ಹೃದಯ ವಿದ್ರಾವಕ ಘಟನೆ ಮೊಳಕಾಲ್ಮೂರಿನ ಎನ್ ಎಂ ಎಸ್ ಬಡಾವಣೆಯಲ್ಲಿ ನಡೆದಿದೆ.
ತಂದೆಯಿಂದಲೇ ಹತನಾದ ಬಾಲಕನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಸಹೋದರರಿಬ್ಬರು ಟಿವಿ ನೋಡಲು ರಿಮೋಟ್ ಗಾಗಿ ಕಿತ್ತಾಟವಾಡಿದ್ದಾರೆ. ಇದರಿಂದ ಕೋಪಗೊಂಡ ತಂದೆ ಲಕ್ಷ್ಮಣ ಬಾಬು ಕತ್ತರಿಯಿಂದ ಚಂದ್ರಶೇಖರ್ ಹೊಡೆದಿದ್ದಾನೆ, ಇದರಿಂದ ಕಿವಿ ಭಾಗದಲ್ಲಿ ತೀವ್ರವಾಗಿ ಗಾಯಗೊಂಡು ರಕ್ತ ಸ್ರಾವವಾಗಿ ಬಾಲಕ ಮೃತಪಟ್ಟಿದ್ದು, ಮೊಳಕಾಲ್ಮೂರು ಪಿಎಸ್ ಐ ಪಾಂಡುರಂಗ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

 

Leave a Reply

Your email address will not be published. Required fields are marked *