ಬೆಂಗಳೂರು: ದಿನೆ ದಿನೇ ಕೋರೋನಾ ಹೆಚ್ಚಳದಿಂದಾಗಿ ಮಕ್ಕಳ ಪರೀಕ್ಷಾ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳದ ರಾಜ್ಯ ಸರ್ಕಾರ 1ರಿಂದ 9 ನೇ ತರಗತಿಯ ಪಠ್ಯ ಕ್ರಮ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
Cbsc ಹಾಗೂ icsc ಪರೀಕ್ಷೆಗಳನ್ನು ರದ್ದು ಮಾಡಿದ್ದ ಹಿಂದೆಯೇ ರಾಜ್ಯ ಸರ್ಕಾರ ರಾಜ್ಯ ಪಠ್ಯಕ್ರಮ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. 6 ರಿಂದ 9 ರವೆಗೆರೆ ಮೌಲ್ಯಂಕನ ಪರೀಕ್ಷೆ ಮಾಡುವಂತೆ ಸಲಹೆ ಬಂದಿತ್ತು.ನಾಲ್ಕು ದಿನಗಳ ಹಿಂದೆ dsert ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ನಂತರ ಜೂಮ್ ಮೀಟಿಂಗ್ ಕೂಡ ಮಾಡಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ಪಡೆದುಕೊಂಡಿದ್ದರು. ದಿನೇ ದಿನೇ ಕೋರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರ 1 ರಿಂದ 9 ರ ವರೆಗಿನ ಪರೀಕ್ಷೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ಸಂಯುಕ್ತವಾಣಿ