ಚಿತ್ರದುರ್ಗ:ಕೇಂದ್ರ ಸರ್ಕಾರ ಬಹಳ ವರೆಸ್ಟ್ ಬಜೆಟ್ ಮಂಡನೆ ಮಾಡಿದೆ . ಬೆಲೆ ಏರಿಕೆ ವಿರುದ್ಧ ನಾವು ಹೋರಾಟ ಮಾಡಲಿದ್ದು, ರೈತರ ಪರ ನಿಲ್ಲುವ ಕಾರ್ಯಕ್ರಮಗಳನ್ನು ನಾವು ನಾಳೆ ಘೋಷಣೆ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.
ಚಿತ್ರದುರ್ಗದಲ್ಲಿ ಮಾತನಾಡಿದ, ಅವರು ಜನರಲ್ಲಿ ಬಜೆಟ್ ನಿಂದ ಉತ್ಸಾಹವೇ ಇಲ್ಲವಾಗಿದೆ. ಯಾವ ವರ್ಗದವರಿಗೂ ಸಮಾಧಾನವೇ ಇಲ್ಲ. ರೈತ, ಕಾರ್ಮಿಕ ಸರ್ಕಾರಿ ನೌಕರರಿಗೂ ಎಲ್ಲಾ ವರ್ಗಕ್ಕೂ ತೊಂದರೆ ಆಗಿದೆ.ಡಿಸೇಲ್ ಪೆಟ್ರೋಲ್ ಮತ್ತೆ ಏರಿಕೆಯಾಗಿದ್ದು, ಜನರು ರೊಚ್ಚಿಗೆದ್ದಿದ್ದಾರೆ. ಜನರಿಂದ ಬಹಳ ಕರೆಗಳು ಬರುತ್ತಿವೆ. ಏಕೆ ಸುಮ್ಮನೆ ಕೂತಿದ್ದಿರಿ ಎಂದು ಬೆಲೆ ಏರಿಕೆ ವಿರುಧ್ದ ನಾವು ಹೋರಾಟ ಮಾಡುತ್ತೆವೆ.
ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಬಿಜೆಪಿ ಕೋರೊನಾ ಕಾಲದಲ್ಲಿಯೇ ಬಿಜೆಪಿ ಭ್ರಷ್ಟಾಚಾರ ಮಾಡಿದೆ. ಹಾಸಿಗೆ,ದಿಂಬು,ಔಷಧಿಯಲ್ಲಿ ಭ್ರಷ್ಟಾಚಾರ ಮಾಡಿದವರು ಬಿಜೆಪಿಯವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಯುಕ್ತವಾಣಿ