ಅಡುಗೆ ತಯಾರಕರಿಗೆ ಆಹಾರ ತಯಾರಿಕೆಯ ಸ್ವಚ್ಛತೆಯ ಕಾರ್ಯಗಾರ
ಮೊಳಕಾಲ್ಮೂರು ತಾಲೂಕಿನ ಅಡುಗೆ ತಯಾರಕರು, ಆಹಾರ ತಯಾರಿಸುವ ಮೊದಲು ಸ್ವಚ್ಛತೆಯನ್ನು ಕಾಪಾಡಬೇಕುವೈಯಕ್ತಿಕ ಸ್ವಚ್ಛತೆಯನ್ನು ಪಾಲಿಸಬೇಕು, ಅಡುಗೆ ಕೊಠಡಿ ಮುಂತಾದ ಸ್ವಚ್ಛತೆಯ ಕ್ರಮಗಳನ್ನು ಪಾಲಿಸಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಚಿದಾನಂದಪ್ಪ ತಿಳಿಸಿದರು
ಅವರು ಅಡುಗೆ ತಯಾರಕರ ಕಾರ್ಯಗಾರ ದಲ್ಲಿ ಮಾತನಾಡಿದರು.
ಕೈಬೆರಳಿನ ಉಗುರುಗಳನ್ನು ತೆಗೆಯುವುದು, ಕೈಗಳನ್ನು ಸೋಪಿನಿಂದ ತೊಳೆಯುವುದು,ಎಲೆ ಅಡಕೆಯನ್ನು ಹಾಕದಂತೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಪಟ್ಟಣದ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶುಭ ಪೃಥ್ವಿ ರಾಜ್ ಪಟ್ಟಣ ಪಂಚಾಯಿತಿ ನಾಮ ನಿರ್ದೇಶೀತ ಸದಸ್ಯೆ ಸರ್ವ ಮಂಗಳ ವಾರ್ಡನ್ ಆಂಜನೇಯ ಹಾಗು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು