ಟಿಕೆಟ್ ನೀಡಿದರೂ ನೀಡದಿದ್ದರೂ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ

ಜಿಲ್ಲಾ ಸುದ್ದಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡಲಿ ಗೆಲುವಿಗೆ ಶ್ರಮಿಸಿ ವಿಶ್ವ ಮೆಚ್ಚಿದ ನಾಯಕ ನರೇಂದ್ರಮೋದಿಯನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡೋಣ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಎಂ.ಸಿ.ರಘುಚಂದನ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನಾಯಕನಹಟ್ಟಿ ಹಾಗೂ ಮೊಳಕಾಲ್ಮುರು ಮಂಡಲಗಳಿಗೆ  ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಎಂ.ಸಿ.ರಘುಚಂದನ್ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೇ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೇಟ್ ಕೇಳಿದ್ದೆ. ಆದರೆ ಹೈಕಮಾಂಡ್ ಮುಂದಿನ ಸಾರಿ ನೀಡುವುದಾಗಿ ಹೇಳಿದ್ದು, ಅದರಂತೆ ನಾಯಕರ ಮಾತಿಗೆ ತಲೆಬಾಗಿ ಅಂದಿನಿಂದ ಇಂದಿನವರೆಗೂ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ವರಿಷ್ಠರು ನನಗೆ ನೀಡಲಿ ಇಲ್ಲ. ಬೇರೆಯವರಿಗೆ ಸ್ಪರ್ಧಿಸಲು ಟಿಕೇಟ್ ನೀಡಲಿ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ. ಗೆದ್ದಿದೆ. ಹಾಗಾಗಿ ಪಕ್ಷವನ್ನು ಈಗಿನಿಂದಲೇ ಗಟ್ಟಿಗೊಳಿಸಬೇಕಿದೆ. ನಿಮಗೆ ಏನೆ ಸಮಸ್ಯೆಗಳಾದರೂ ಮಧ್ಯರಾತ್ರಿಯಲ್ಲಿ ಫೋನ್ ಮಾಡಿ ಸ್ಪಂದಿಸುತ್ತೇನೆ. ಕಾರ್ಯಕರ್ತರ ನೋವು ನನ್ನ ನೋವೆಂದುಕೊಂಡಿದ್ದೇನೆ. ಪ್ರಧಾನಿ ನರೇಂದ್ರಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಗಾಟಿಸಿ ಭಾರತೀಯರ ಐದು ನೂರು ವರ್ಷಗಳ ಕನಸನ್ನು ನನಸುಗೊಳಿಸಿ ಭಾವನೆಗಳನ್ನು ಎತ್ತಿ ಹಿಡಿದಿದ್ದಾರೆ. ಆರ್ಥಿಕ ವಹಿವಾಟಿನಲ್ಲಿ ಭಾರತ ಈಗ ಐದನೇ ಸ್ಥಾನದಲ್ಲಿರುವುದರಿಂದ ನರೇಂದ್ರಮೋದಿರವರ ಕೈಬಲಪಡಿಸೋಣ ಎಂದು ಕಾರ್ಯಕರ್ತರಲ್ಲಿ ಎಂ.ಸಿ.ರಘುಚಂದನ್ ವಿನಂತಿಸಿದರು.
ನಾಯಕನಹಟ್ಟಿ, ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ನೇರಲಹಳ್ಳಿ, ತುಮಕೂರ್ಲಹಳ್ಳಿ, ರಾಯಾಪುರ, ಮೊಳಕಾಲ್ಮುರು, ಹಾನಗಲ್, ನುಂಕೆಮಲೆ, ಹಿರೇಹಳ್ಳಿ, ಚಿಕ್ಕೇರಹಳ್ಳಿ, ನಾಗಸಮುದ್ರ, ಸಿದ್ದಾಪುರ, ದೇವಸಮುದ್ರ, ರಾಂಪುರ, ಗೌರಸಮುದ್ರ, ಉಳ್ಳಾರ್ತಿ ಗ್ರಾಮಗಳಿಗೆ ಎಂ.ಸಿ.ರಘುಚಂದನ್ ಭೇಟಿ ನೀಡಿದರು.
ಮಹೇಶಣ್ಣ, ಶಿವಣ್ಣ, ನಾಗರಾಜ್, ರಾಮಣ್ಣ, ಪ್ರಭು, ಮಾಜಿ ಸಚಿವ ತಿಪ್ಪೇಸ್ವಾಮಿ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *