ಚಿತ್ರದುರ್ಗ ಕಾಂಗ್ರೆಸ್ ಭದ್ರಕೋಟೆ ಎಂದು ಸಾಬೀತು ಮಾಡಲು ಎಲ್ಲರು ಚಂದ್ರಪ್ಪ ಗೆಲುವಿಗೆ ಶ್ರಮಿಸಿ: ಶಾಸಕ ರಘುಮೂರ್ತಿ

ರಾಜ್ಯ

ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಜನಬೆಂಬಲ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ:ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನರು ಬೇಸತ್ತು ಹೋಗಿದ್ದು, ಜನರು ದೇಶದಲ್ಲಿ ಬದಲಾವಣೆ ಬಯಸುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿಸಲು ಜನರು ಉತ್ಸುಕವಾಗಿದ್ದಾರೆ.ಬಿಜೆಪಿ ಬಾಯಿ ಬಿಟ್ಟರೆ ಸುಳ್ಳು ಹೇಳುವ ಮೂಲಕ ಜನರ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಶಾಸಕ ಟಿ.ರಘುಮೂರ್ತಿ ಕಿಡಿಕಾರಿದರು..

ಮಂಗಳವಾರದಂದು ತಾಲೂಕಿನ ತುರುವನೂರು ಹೋಬಳಿಯ ಸಿದ್ದೇಶ್ವರ ದುರ್ಗ,ಮುದ್ದಾಪುರ,ಸುಲ್ತಾನಿಪುರ ಹಿರೇಕಬ್ಬಿಗೆರೆ,ಮಾಡನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿ ಸೇರಿ ಹಲವು ಹಳ್ಳಿಗಳಲ್ಲಿ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ವಿರುದ್ದ ಜನಕ್ರೋಶ ವ್ಯಕ್ತವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಎಲ್ಲೆಡೆ ಬಾರಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ತುರುವನೂರು ಹೋಬಳಿ ಪ್ರಚಾರ ಮಾಡುತ್ತಿದ್ದು, ಅತಿ ಹೆಚ್ಚಿನ ಮತಗಳನ್ನು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಚಲಾಯಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಬಿ.ಎನ್.ಚಂದ್ರಪ್ಪ ಲೋಕಸಭಾ ಸದಸ್ಯರಾಗಿ ಆಯ್ಕೆಯಾದಲ್ಲಿ ಭದ್ರಾ ಮೇಲ್ದಂಡೆ ಸೇರಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಮೂಲಕ ಪರಿಹಾರ ಒದಗಿಸುವ ಕೆಲಸ ಮಾಡುತ್ತಾರೆ. .ರಾಜ್ಯದಲ್ಲಿ ನಮ್ಮದೇ ಸರ್ಕಾರ ಆಡಳಿತದಲ್ಲಿ ಇದ್ದು ಜನರಿಗೆ ಅಭಿವೃದ್ಧಿ ಕಾರ್ಯ ಮಾಡಲು ಸಹಕಾರಿಯಾಗಲಿದೆ ಎಂದರು.

ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ನಮಗೆ ಸಹಕಾರಿಯಾಗಲಿವೆ. ಗ್ಯಾರಂಟಿ ವಿರುದ್ದ ಗೇಲಿ ಮಾಡಿದವರಿಗೆ ಇಂದು ಜನರು ಉತ್ತರ ನೀಡುತ್ತಿದ್ದಾರೆ. ವಿರೋಧ ಪಕ್ಷದವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ನಮ್ಮ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಲು ಎಲ್ಲಾ ಮುಖಂಡರು ಕಾರ್ಯಕರ್ತರು ಹಗಲಿರುಳು ಚಂದ್ರಪ್ಪ ಗೆಲುವಿಗೆ ಶ್ರಮಸಿ ಎಂದು ಕರೆ ನೀಡಿದರು.

 

 

 

ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಪ್ರಕಾಶ್ ಮೂರ್ತಿ, ಬಾಬುರೆಡ್ಡಿ, ಮಾಜಿ ತಾ.ಪಂ. ಅಧ್ಯಕ್ಷ ಲಿಂಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಪ್ಪ, ಶಶಿಧರ, ಮುಖಂಡರಾದ ರಾಜಪ್ಪ, ಮಂಜುನಾಥ್, ರವಿ, ಲಕ್ಷ್ಮಣ, ಸಿದ್ದೇಶ್, ನಿರಂಜನ್, ನಾಗೇಶ್, ಲೋಕೇಶ್, ಮೈಲಾರಪ್ಪ, ಚೌಡಪ್ಪ, ಸತೀಶ್, ಲೋಕೇಶ್, ಪರಮೇಶ್, ವಾಜಿದ್, ಬಸವರಾಜ್ ಇದ್ದರು.

 

 

 

 

 

Leave a Reply

Your email address will not be published. Required fields are marked *