ಬಳ್ಳಾರಿ: ಶಾಪ ವಿಮೋಚನೆಗಾಗಿ ಡಿಕೆಶಿ ಮೈಲಾರಲಿಂಗೇಶ್ವರ ಸ್ವಾಮಿಯ ಮೊರೆ ಹೋಗಿದ್ದು, ಮಾಡಿದ ತಪ್ಪಿಗಾಗಿ ಬೆಳ್ಳಿ ಹೆಲಿಕಾಪ್ಟರ್ ದೇಣಿಗೆ ನೀಡುವ ಮೂಲಕ ತಪ್ಪು ಕಾಣಿಕೆ ಒಪ್ಪಿಸಿದ್ದಾರೆ…
ಕಳೆದ ಮೂರು ವರ್ಷಗಳ ಹಿಂದೆ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದ ದಿನ ಹೆಲಿಕಾಪ್ಟರ್ ಮೂಲಕ ಡಿಕೆಶಿ ಬಂದಿದ್ದರು. ಆದರೆ ಕಾರ್ಣಿಕೋತ್ಸವದ ಪೂರ್ವ ಹಾಗು ನಂತರ ಒಂದು ವಾರ ಕಾಲ ಯಾವುದೇ ಒಂದು ಹಕ್ಕಿ ಪಕ್ಷಿಯೂ ಕೂಡ ತೆಂಕಣ ಮರಡಿಯ ಮೇಲೆ ಹಾರಾಡವುದು ಕಂಡು ಬರುವುದಿಲ್ಲ. ಆದರೆ ದೇವಸ್ಥಾನದ ಮೇಲೆ ಹಾರಾಟ ಮಾಡಿದರೆ ಸಂಕಷ್ಟುಗಳು ಎದುರಾಗುತ್ತವೆ ಎಂಬ ನಂಬಿಕೆ ಇದೆ.ಇಂತಹ ಸಮಯದಲ್ಲಿ ಡಿಕೆಶಿ ಹೆಲಿಕಾಪ್ಟರ್ ಮೂಲಕ ಹಾರಿ ಬಂದು ಪ್ರಮಾದ ವೆಸಗಿದ್ದರು.
ಅದಕ್ಕೆ ಅವರಿಗೆ ಸಿಸಿಬಿ ರೈಡ್ ದಾಳಿಗಳು ತನಿಖೆಗಳು ಇಂತಹ ಸಂಕಷ್ಟಗಳು ಎದುರಾಗಿವೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದರ ನಿವಾರಣೆಗಾಗಿ ಡಿಕೆಶಿ ಇಂದು ಮೈಲಾರಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ ಗುರುಗಳು ಹಾಗೂ ಕಾರ್ಯಕರ್ತರ ಸಲಹೆ ಮೇರೆಗೆ ಒಂದು ಕೇಜಿ ತೂಕದ ಹೆಲಿಕಾಪ್ಟರ್ ಕಾಣಿಕೆ ನೀಡಿ ಹರಕೆ ತೀರಿಸಿದ್ದಾರೆ.
ಸಂಯುಕ್ತವಾಣಿ