ಜಿಲ್ಲಾ ಸುದ್ದಿ

ಚಿತ್ರದುರ್ಗ: ಹಾಲಿ ಸಚಿವರಾಗಲಿ ಅಥವ ಮಾಜಿ ಸಚಿವರುಗಳಾಗಲಿ ಅವರ ಯಾವುದೇ ಕಾರ್ಯಕ್ರಮಗಳು ಅದ್ದೂರಿತನದಿಂದ ಕೂಡಿರುತ್ತವೆ. ಆದರೆ ಕೋವಿಡ್ ಸಮಯ ಹಾಗೂ ಸರಳತೆಗೆ ಆದ್ಯತೆ ನೀಡುವ ಮಾಜಿ ಸಚಿವ ಎಚ್. ಆಂಜನೇಯ ಅವರು ಇಂದು ತಮ್ಮ 30 ನೇ ಮದುವೆ ವಾರ್ಷಿಕೋತ್ಸವವನ್ನು ಮದುವೆಯೊಂದರಲ್ಲಿ ಸರಳವಾಗಿ ಆಚರಿಸಿಕೊಂಡು ಮಾದರಿಯಾದರು.

Chitradurga simple wedding annivetsery

 

 

 

ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯ ಬಳಿ ಚಳ್ಳಕೆರೆ ಗೇಟ್ ನಲ್ಲಿರುವ ಕಬೀರಾನಂದ ಸಮೂದಾಯ ಭವನದಲ್ಲಿ ಇಂದು ತಮಗೆ ಆಪ್ತರಾಗಿರುವ ಎರಡು ಜೋಡಿಗಳ ವಿವಾಹವವನ್ನು ಅವರೇ ನಿಂತು ನೆರವೇರಿಸುವ ಮೂಲಕ ಸರಳವಾಗಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ‌ ಸಮಾನ್ಯರಂತೆ ತಮ್ಮ 30 ನೇ ಮದುವೆ ವಾರ್ಷೀಕೋತ್ಸವವನ್ನು ಕೇಕ್ ಕತ್ತರಿಸುವಮೂಲಕ ಆಚರಿಸಿಕೊಂಡು ಸರಳತನಕ್ಕೆ ಸಾಕ್ಷಿಯಾದರು.

Chitradurga simple wedding anniverseryಇಂದಿರಾ ಗಾಂಧಿ ಅವರ ಜಯಂತಿಯಂದು ತಮ್ಮ ಪುತ್ರಿಯ ವಿವಾಹವನ್ನು ತಮ್ಮ ಕ್ಷೇತ್ರ ಹೊಳಲ್ಕರೆಯಲ್ಲಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ‌ ನೆರವೇರಿಸುವ ಮೂಲಕ ಮಾದರಿಯಾಗಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.
ಇದೇ ಸಮಯದಲ್ಲಿ‌ ಕಬೀರಾನಂದಶ್ರೀಗಳು ಆಂಜನೇಯ ದಂಪತಿಗಳನ್ನ ಗೌರವಿಸಿದರು.

Leave a Reply

Your email address will not be published. Required fields are marked *