Chitradurga publics WL not figuve us

ಕೇಂದ್ರ ಸಂಪುಟಕ್ಕೆ ನಾರಾಯಣಸ್ವಾಮಿ ಫಿಕ್ಸ್ ಸಂಜೆ ಪ್ರಮಾಣ ವಚನ ?

ಜಿಲ್ಲಾ ಸುದ್ದಿ

ಚಿತ್ರದುರ್ಗ: ಕೋಟೆ ನಾಡಿನಿಂದ ಸಂಸದರಾಗಿ ಮೊದಲ ಬಾರಿಗೆ ಆಯ್ಕೆಯಾಗಿರುವ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಅವರಿಗೆ ದಕ್ಕಿತು ಸಚಿವ ಸ್ಥಾನ.

Chitradurga anekal narayana swamy minister

 

 

 

ಸಂಜೆ ಆರು ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಮಂಗಳವಾರವೇ ದೆಹಲಿಗೆ ಕುಟುಂಬ ಸಮೇತರಾಗಿ ನಾರಾಯಣಸ್ವಾಮಿ ಅವರು ತೆರಳಿದ್ದು ಭಾರೀ ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿತ್ತು. ಅಂದಿನ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಅವರೇ ಹೇಳಿರುವಂತೆ ಎಡಗೈ ದಲಿತ ಸಮೂದಾಯದಿಂದ ಬಂದಿರುವ ನನಗೆ ಸಚಿವ ಸ್ಥಾನ ನೀಡಿರುವುದು ಸಂತಸ ತಂದಿದೆ. ಹಾಗೂ ಪ್ರಧಾನಿ ಮೋದಿ ಅವರ ಸಚಿವ ಸಂಪುಟದಲ್ಲಿ ಸಚಿವನಾಗಿರುವುದು ನನ್ನ ಭಾಗ್ಯ. ಅವರ ನಿರೀಕ್ಷೆಯಂತೆ ಕೆಲಸ ಮಾಡಿ ಅಸಹಾಯಕರ ಧ್ವನಿಯಾಗುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನಾಲ್ಕು ಭಾರಿ ಅನೆಕಲ್ ಶಾಸಕರಾಗಿದ್ದ ನಾರಾಯಣಸ್ವಾಮಿ ಅವರನ್ನು 2010 ರಲ್ಲಿ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಸಚಿವ ಸ್ಥಾನ ನೀಡಿತ್ತು. ನಂತರದಲ್ಲಿ ಬಂಧಿಖಾನೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಬಾರಿಯೇ ಮಿನಿಸ್ಟರ್ ಆಗುವ ಅದೃಷ್ಟ ಒಲಿದು ಬಂದಿದೆ. ಬಹುದಿನಗಳಿಂದ ಚಿತ್ರದುರ್ಗ ದಾವಣಗೆರೆ ರೈಲ್ವೇ ನೇರ ಮಾರ್ಗದ ನಿರ್ಮಾಣದ ಕನಸು ಮತ್ತೆ ಚಿಗುರೊಡೆದಿದೆ.ಹಾಗೆಯೇ ಭದ್ರಾ ಮೇಲ್ದಂಡೆ ಯೋಜನೆಯೂ ರಾಷ್ಟ್ರೀಯ ಯೋಜನೆ ಆಗುವ ದಿನಗಳು ದೂರವಿಲ್ಲ ಎಂದು ಜನತೆ ಸಂಭ್ರಮದಲ್ಲಿ ತೊಡಗಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *