ರಾಜ್ಯದ ನೂತನ ಸಿಎಂ ಆಯ್ಕೆ ಇನ್ನು ಆಗಿಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜಿತ್ ಸಿಂಗ್ ಸುರ್ಜೆವಾಲ ಸ್ಪಷ್ಟ ಪಡಿಸಿದ್ದು.ಇನ್ನು 72 ಗಂಟೆಗಳ ಕಾಲದಲ್ಲಿ ಸಿಎಂ ಅಷ್ಟೆ ಅಲ್ಲ ಸಚಿವರ ಆಯ್ಕೆಯನ್ನು ಮಾಡಲಾಗುತ್ತದೆ ಎಂದರು.
ಬೆಳಗ್ಗೆ ಎಲ್ಲವೂ ಮುಗಿಯಿತು. ನಾಳೆ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಶಿವಕುಮಾರ್ ತಮ್ಮ ಪಟ್ಟು ಬಿಡದ ಕಾರಣ ಸಿಎಂ ಆಯ್ಕೆಯಲ್ಲಿ ಟ್ವಿಸ್ಟ್ ಆಗಿದ್ದು, ರಾಜ್ಯ ಉಸ್ತು ವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸುಳ್ಳು ಸುದ್ದಿ ಗಳು ಹರಿದಾಡುತ್ತಿವೆ . ಕಂಠೀರವ ಸ್ಟೇಡಿಯಂ ನಲ್ಲಿ ಸಿದ್ದತೆ ನಡೆಯುತ್ತಿದೆ. ಈ ನಡುವೆ ಸಿಎಂ ಆಯ್ಕೆ ಬಗ್ಗೆ ಯಾವುದೇ ನಿರ್ಧಾರ ವಾಗಿಲ್ಲ ಹರಿದಾಡುತ್ತಿರುವ ಸುಳ್ಳು ಯಾರು ಇದಕ್ಕೆ ಕಿವಿ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.